ಸಾಹಿತ್ಯ, ಕಲೆ ಮತ್ತು ಸಂಗೀತದ ಸಾಹಿತ್ಯ, ಕಲೆ ಮತ್ತು ಸಂಗೀತದ ಸಂಭ್ರಮಕ್ಕೆ ಸುಸ್ವಾಗತ!

ಪದಾಂತರಂಗ​- ಅಂದ್ರೇನು?

ಪದಗಳ ತರಂಗ (ಸಾಹಿತ್ಯದ ರೂಪ​)
ಪದಗಳ ಅಂತರಂಗ (ಭಾವ​)
ಪದಗಳ ಅಂತರಂಗವನ್ನು (ಭಾವವನ್ನು) ವ್ಯಕ್ತಪಡಿಸುವ ರಂಗ ಅಥವಾ ವೇದಿಕೆ.

ಬುನಾದಿ - ನಿಸ್ವಾರ್ಥ ಸೇವೆಯ ಮನೋಭಾವ​

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟೂ

ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟೂ..
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟೂ..

ಪದಾಂತರಂಗದ ಅಭಿನಂದನೆಗಳು- ಹಿರಿಯ ಸಾಹಿತಿ
ಡಾ. ಹೆಚ್. ಎಸ್. ವೆಂಕಟೇಶಮೂರ್ತಿ ಅವರಿಂದ​.

ಮೂಲ ಉದ್ದೇಶಗಳು

ಸಂಸ್ಥಾಪಕರು

ಗುರು ಕೃಷ್ಣಮೂರ್ತಿ

ಮೌಂಟನ್ ಹೌಸ್, ಕ್ಯಾಲಿಫೋರ್ನಿಯ, USA. padaantaranga@gmail.com

ಪರಿಚಯ

ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಮಧ್ಯಕಣಿವೆಯಲ್ಲಿ ಕನ್ನಡದ ಕಂಪನ್ನು ಸೂಸುತ್ತಿರುವ ಗುರು ಕೃಷ್ಣಮೂರ್ತಿಯವರ ಒಂದು ಕಿರುಪರಿಚಯ ಇಂತಿದೆ.
ಕನ್ನಡ ಶಿಕ್ಷಕಿಯೊಬ್ಬರ (ಅಜ್ಜಿ)ಆಶ್ರಯದಲ್ಲಿ, ಕನ್ನಡ ಸ್ನೇಹಿ ವಾತಾವರಣ ತುಂಬಿದ ಮನೆಯಲ್ಲಿ ಬೆಳೆದು ಸಹಜವಾಗಿಯೇ ಕನ್ನಡ ನಡೆ, ನುಡಿ, ಸಾಹಿತ್ಯದಲ್ಲಿ ಒಲವು. ಗ್ರಾಮಾ೦ತರ ಪ್ರದೇಶವಾದ ಮಾಗಡಿಯಲ್ಲಿ ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ, ಶಾಲಾ ಕಾಲೇಜುಗಳಲ್ಲಿ ಪ್ರಬಂಧ, ಚರ್ಚೆ, ಕಥೆ, ಕವನ ಬರೆಯುವಿಕೆಯ ಮೂಲಕ ಕನ್ನಡ ಸಾಹಿತ್ಯದ ಬಗೆಗಿನ ಅಭಿರುಚಿಯನ್ನು ಮುಂದುವರೆಸಿದರು. ಸುಮಾರು 5 ವರ್ಷಗಳ ಕಾಲ ತಾವು ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಗಳ ಮೂಲಕ ಕರ್ನಾಟಕದ ಹಳ್ಳಿಯ ಶಾಲಾ ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಕನ್ನಡದಲ್ಲಿ ವಿಜ್ಞಾನವನ್ನು ಬೋಧಿಸಿದ ಹೆಗ್ಗಳಿಕೆ ಇವರದ್ದು.

ಮಾಗಡಿಯ ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದ ಓದನ್ನು ಮುಗಿಸಿದ ಇವರು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮಾಡಿ ಪದವಿಯನ್ನು ಪಡೆದರು. ಡೆಲ್‌, ಮೈಕ್ರೋಸಾಫ್ಟ್‌, ಸಿಸ್ಕೋ ಕಂಪೆನಿಗಳಲ್ಲಿ ಕೆಲಸಮಾಡುತ್ತಿದ್ದ ಇವರ ಜೀವನ ನೌಕೆ ಸಿಸ್ಕೋ ಕಂಪೆನಿಯ ಮೂಲಕ ಅಮೆರಿಕೆಯ ವಾಸಕ್ಕೆ ಅಣಿಯಾಯಿತು. ಪರಿಣಾಮ 2015ರಲ್ಲಿ ಕ್ಯಾಲಿಫೋರ್ನಿಯಕ್ಕೆ ವಲಸೆ. ಇಲ್ಲಿ ಕ್ಯಾಲಿಫೋರ್ನಿಯಾಕ್ಕೆ ಬಂದಮೇಲೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲಿ ಬಿಸಿನೆಸ್‌ ಸ್ಕೂಲ್ ಗಳಲ್ಲಿ ಉನ್ನತ ವ್ಯಾಸಂಗ.

ಪದಾಂತರಂಗದ ಆರು ಸ್ತಂಭಗಳು

ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯದ ಎಲ್ಲ ಶ್ರೇಣಿಗಳನ್ನು ಒಂದೇ ವೇದಿಕೆಯಲ್ಲಿ ಒಳಗೊಂಡು, ಕತೆ-ಕವನ, ಪ್ರಬಂಧ, ವಿಮರ್ಶೆ, ಆಧುನಿಕ ಲೇಖನಗಳು ಮತ್ತು ಶ್ರೇಷ್ಠ ಅನಿವಾಸಿ ಕನ್ನಡ ಬರಹಗಾರರ ಸಾಹಿತ್ಯವನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಸಂಗೀತ ಮತ್ತು ಕಲೆ

ಕನ್ನಡ ಸಾಹಿತ್ಯದ ಅಂತರಂಗವನ್ನು ವ್ಯಕ್ತಪಡಿಸುವ, ಅನಿವಾಸಿ ಕನ್ನಡಿಗರು ರಚಿಸಿರುವ ಗೀತೆಗಳು, ಕಥೆಗಳ ಧ್ವನಿಮುದ್ರಣಗಳು ಹಾಗೂ ಪದಾಂತರಂಗ ಅಯೋಜಿಸಿರುವ ಸಂಗೀತ ಹಾಗೂ ಕಲಾ ಕಾರ್ಯಕ್ರಮಗಳ ಸಂಗ್ರಹ​

ಸ್ಪರ್ಧೆಗಳು

ವಿಶ್ವಮಟ್ಟದ ಸ್ಪರ್ಧೆಗಳು ಅನಿವಾಸಿ ಕನ್ನಡಿಗರಗನ್ನು ಬೆಸೆಯುವ​, ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಸದಾ ನೆನಪಿಸಿ, ಹೆಮ್ಮೆ ಪಡುವ ಅವಕಾಶಗಳನ್ನು ಕೊಡುವ ವಿಶ್ವಮಟ್ಟದ ಸ್ಪರ್ಧೆಗಳ ತಾಣ​

ಕನ್ನಡ ಗುರುಕುಲ

ಹೈಸ್ಕೂಲ್ ಮಕ್ಕಳು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಯಸ್ಕರಿಗಾಗಿಯೇ ರಚಿಸಿರುವ ವಿಭಿನ್ನ ಕನ್ನಡ ಕಲಿಕೆ ಕಾರ್ಯಕ್ರಮ​. ಅನಿವಾಸಿ ಕನ್ನಡಿಗರಿಗೆ ಕನ್ನಡವನ್ನು ಹೊಸ ದೃಷ್ಟಿಕೋನದಲ್ಲಿ ಪರಿಚಯಿಸುವ ಒಂದು ವಿಶಿಷ್ಟ ಹಂತ.

ದೇಣಿಗೆ ಕಾರ್ಯಕ್ರಮಗಳು

ವೈವಿಧ್ಯಮಯ ಹಾಗೂ ವಿಭಿನ್ನ ಕಾರ್ಯಕ್ರಮಗಳು ಹಾಗೂ ಪ್ರಯೋಗಗಳ ಮೂಲಕ ಬರುವ ದೇಣಿಗೆಯನ್ನು ಕನ್ನಡ ನಾಡು ಹಾಗೂ ನುಡಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಹಾಯ ಮಾಡುವುದು

ಕನ್ನಡದ ದೀವಟಿಗರು ಮತ್ತು ಪದಾಂತರಂಗ ವಾರ್ತೆ

ಹೊರನಾಡ ಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪೋಷಿಸುವುದು ಹೊರನಾಡ ಕನ್ನಡಿಗರ ಮಕ್ಕಳಲ್ಲಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು, ಅಭಿಮಾನ ಮೂಡಿಸುವುದು

ನಮ್ಮ ಆಪ್ತ ಸಲಹೆಗಾರರು

ಡಾ. ನಾ ಸೋಮೇಶ್ವರ

ಡಾ. ಗಜಾನನ ಶರ್ಮಾ

ಡಾ. ಹೆಚ್. ಎಸ್. ವೆಂಕಟೇಶಮೂರ್ತಿ

ನಮ್ಮ ಪ್ರಾಯೋಜಕರು

SKK

Book Brahma

MN Kannada Book Club

Sanatana Spiritual Society

ಸಾಮಾಜಿಕ ಮಾಧ್ಯಮ

Scroll to Top