ಡಾ ಪ್ರೇಮಲತ ಬಿ

  • UNITED KINGDOM

ಪರಿಚಯ

ಲೇಖಕಿ ಮೂಲತಃ ತುಮಕೂರಿನವರು, ಕಳೆದ 23 ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ.. ಹವ್ಯಾಸೀ ಬರಹಗಾರ್ತಿ. 

ʼಐದುಬೆರಳುಗಳುʼ ʼತಿರುವುಗಳುʼ (2022) ಮತ್ತು ʼನಂಬಿಕೆಯೆಂಬ ಗಾಳಿಕೊಡೆʼ (2023) ಇವರ ಪ್ರಕಟಿತ ಕಥಾಸಂಕಲನಗಳು. ʼ, ʼಭಿಕ್ಷೆಗೆ ಬೀಳದ ಬದ್ಧತೆʼ (2024) ಇವರ ಪ್ರಕಟಿತ ಕವನ ಸಂಕಲನ, ʼಕೋವಿಡ್‌ ಡೈರಿʼ (2021) ಮತ್ತು ʼವಿದೇಶ ಪ್ರಯಾಣ, ಕೈತುಂಬ ಕಾಂಚಾಣʼ (2024 ) ಅಂಕಣ ಬರಹಗಳ ಪುಸ್ತಕಗಳು. ʼಬಾಯೆಂಬ ಬ್ರಂಹಾಂಡʼ (2018)ವೈದ್ಯಕೀಯ ಬರಹಗಳ ಪುಸ್ತಕ ʼರಮ್ಯಪ್ರೀತಿ, ವಿಜ್ಞಾನ ಮತ್ತು ಪ್ರಕೃತಿʼ (2024) ಮತ್ತು ಒಡಲು ಮತ್ತು ಸೃಷ್ಟಿ (2026) ಇವರ ವಿಷ್ಲೇಶಣಾತ್ಮಕ ಕೃತಿಗಳು. ‘ವಿದೇಶ ಪ್ರಯಾಣ, ಕೈತುಂಬ ಕಾಂಚಾಣ; (2026) ಇವರ ಪ್ರ/ನಿ/ಅನಿವಾಸೀ ಪ್ರಬಂಧ ಸಂಕಲನ ರೂಪದ ಆತ್ಮಕಥನವಾಗಿದೆ.

ಐದು ಬೆರಳುಗಳು ಕಥಾ ಸಂಕಲನಕ್ಕೆ ಇತ್ತೀಚೆಗೆ ಡಾ.ಹೆಚ್.‌ ಗಿರಿಜಮ್ಮ ಪ್ರಶಸ್ತಿ (2023) ದೊರಕಿದೆ. ಧಾರವಾಡದ ಶ್ರಾವಣ ಸಂಸ್ಥೆ ʼಅನಿವಾಸಿ ಸಾಹಿತ್ಯ ಶ್ರೀʼ (2022) ಪ್ರಶಸ್ತಿ ನೀಡಿದೆ. ʼತಿರುವುಗಳುʼ ಕಥಾಸಂಕಲನಕ್ಕೆ ವಿದ್ಯಾಧರ ಮುತಾಲಿಕ ದೇಸಾಯಿ ಪ್ರಶಸ್ತಿ ದೊರೆತಿದೆ (2022) ಪ್ರಬಂಧಗಳು ಸುಧಾ  ಯುಗಾದಿ ಸ್ಪರ್ಧೆಗಳಲ್ಲಿ (2024 ಮತ್ತು 2019) ಬಹುಮಾನಿತವಾಗಿವೆ.

ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ(2024) ಮತ್ತು ವಾಣಿ ಕೌಟುಂಬಿಕ ಕಥಾ ಸ್ಪರ್ಧೆ(2024)ಗಳಲ್ಲಿ ಮೆಚ್ಚುಗೆಯ ಬಹುಮಾನ, ಸಮಾಜಮುಖಿ ಕಥಾ ಸ್ಪರ್ಧೆಯ ಬಹುಮಾನ (2023)ಲೇಖಿಕಾ ಸಂಘದ ತ್ರಿವೇಣಿ ಸ್ಮೃತಿ ಮನೋ ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2021) 3K ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ(2021)  ಯು.ಎ.ಇ.ಯ ಧ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಜಾಗತಿಕ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ  (2021),  ಕಹಳೆ ಕಥಾ  ಸ್ಪರ್ಧೆಯ ಅತ್ಯುತ್ತಮ ಕಥೆ (2021 ಮತ್ತು 202೦) ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯಲ್ಲಿ  ನಿರ್ಮಲ ಎಲಿಗಾರ್‌ ದತ್ತಿ ಪ್ರಥಮ ಬಹುಮಾನ(2019), ಸುಧಾ ಪತ್ರಿಕೆಯ ಯುಗಾದಿ ಪ್ರಭಂದ ಸ್ಪರ್ದೆಯಲ್ಲಿ ಸಮಾಧಾನಕರ ಬಹುಮಾನ (2019), ಪ್ರಜಾವಾಣಿ  ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2017), ಸಿಂಗಾಪೂರ್ ನಡೆಸಿದ ಸಿಂಚನ ಕಥಾ ಸ್ಪರ್ಧೆಯಲ್ಲಿ ಪ್ರಥಮ (2016) ಮತ್ತು ಕವನ ಸ್ಪರ್ದೆಯಲ್ಲಿ  ದ್ವಿತೀಯ ಬಹುಮಾನ  (2017) ತುಷಾರ ಚಿತ್ರಕವನ ಸ್ಪರ್ಧೆಯ ಸಮಾಧಾನಕರ ಬಹುಮಾನಗಳು (1997) ಇವರಿಗೆ ದೊರೆತಿವೆ.

ಬೆಂಗಳೂರಿನ ಸರ್ಕಾರಿ ದಂತವೈದ್ಯಕೀಯ ಕಾಲೇಜಿನ ಪದವಿ ಮತ್ತು ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಡೆಂಟಲ್‌ ಇಂಪ್ಲಾಂಟಜಿಸ್ಟ್‌ ಆಗಿ ಹಲವು ದಂತ ಚಿಕಿತ್ಸಾಲಯಗಳಲ್ಲಿ ಕೆಲಸಮಾಡುತ್ತಿದ್ದಾರೆ. ಪ್ರಸ್ತುತ ಇಂಗ್ಲೆಂಡಿನ ಲಿಂಕನ್‌ ಎನ್ನುವ ನಗರದಲ್ಲಿ ವಾಸವಾಗಿದ್ದಾರೆ.ಓದು,ಬರಹ,ನಿರೂಪಣೆ, ಪ್ರವಾಸ, ನಾಟಕದ ಹವ್ಯಾಸಗಳೊಂದಿಗೆ ನಾಡಿನ ಮತ್ತು ಇಂಗ್ಲೆಂಡಿನ ಹಲವು ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ

ಪ್ರಕಟಗೊ೦ಡ ಕೃತಿಗಳು

 ಕ್ರಮ ಸಂಖ್ಯೆ/

ಶೀರ್ಷಿಕೆ/

ಪ್ರಕಾರ/

ಪ್ರಕಾಶನ/

ಮಾಧ್ಯಮ/

ಪ್ರಕಟಣೆಯ ವರ್ಷ/

1

ಒಡಲು ಮತ್ತು ಸೃಷ್ಟಿ

Odalu mattu srushti

ಸಾಮಾಜಿಕ/ವೈದ್ಯಕೀಯ

Social/scientic

ಪರಿಚಯ ಪ್ರಕಾಶನ

Parichaya prakashana

ಮುದ್ರಿತ ಮಾದ್ಯಮ

 

print

2026

2

Videsha prayana, kaitumba kanachana

Collection of essays-travelogue, resident stories and an introspection

 ಸಾವಣ್ಣ ಪ್ರಕಾಶನ

Sawanna prakashana

ಮುದ್ರಿತ ಮಾದ್ಯಮ

print

2026

3

Bhikshege beelada baddhathe

Collection of poems

ಕಥಾಬಿಂದು

Kathabindu publication

ಮುದ್ರಿತ ಮಾದ್ಯಮ

 

print

2024

4

Ramya Preethi, vijnana and society

Social scientific

ನವಕರ್ನಾಟಕ ಪ್ರಕಾಶನ

Navakarnataka publication

ಮುದ್ರಿತ ಮಾದ್ಯಮ

print

2024

5

Nambike emba gaalikode

Short stories collection/Anthology

ವೀರಲೋಕ ಪ್ರಕಾಶನ

Veeraloka publication

ಮುದ್ರಿತ ಮಾದ್ಯಮ

print

2023

6

Idu beralugalu

Short stories collection/Anthology

ಸೀಮ ಪ್ರಕಾಶನ

Seema publication

ಮುದ್ರಿತ ಮಾದ್ಯಮ

print

2022

7

Thiruvugalu

Short stories collection/Anthology

ಸೀಮ ಪ್ರಕಾಶನ

Seema publication

ಮುದ್ರಿತ ಮಾದ್ಯಮ

print

2022

8

Covid Diary

Collection of column writings on Covid

ಸಾವಣ್ಣ ಪ್ರಕಾಶನ

Sawanna publications

ಮುದ್ರಿತ ಮಾದ್ಯಮ

print

2021

9

Baayemba bramhanda

Professional/oral health

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ

Department of karnataka saahitya and samshriti

ಮುದ್ರಿತ ಮಾದ್ಯಮ

print

2018

 

Scroll to Top