—–
ತ್ರಿವೇಣಿ ಶೀನಿವಾಸರಾವ್.
ಹುಟ್ಟಿದ ಊರು : ಚಿಕ್ಕಮಗಳೂರು ಜಿಲ್ಲೆಯ ಕಡೂರು
ಪ್ರಕಟಿತ ಪುಸ್ತಕಗಳು : ‘ತುಳಸಿವನ’(ಪ್ರಬಂಧ ಸಂಕಲನ) ಮತ್ತು ’ತಿಳಿನೀಲಿ ಪೆನ್ನು’ (ಕಥಾ ಸಂಕಲನ)
ಆಸಕ್ತಿ : ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಸಿನಿಮಾ, ಸಂಗೀತ, ನಾಟಕ, ದಾಸಸಾಹಿತ್ಯ.
ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಪಸರಿಸಲು ಪ್ರಾರಂಭವಾದ ಸಂಸ್ಥೆಯಾದ ಕನ್ನಡ ಸಾಹಿತ್ಯ ರಂಗದ ಪದಾಧಿಕಾರಿಗಳಲ್ಲೊಬ್ಬರು ಮತ್ತು ಕನ್ನಡ ಸಾಹಿತ್ಯ ರಂಗ ವೆಬ್ ತಾಣ, ಫೇಸ್ಬುಕ್ ಪುಟಗಳ ನಿರ್ವಾಹಕಿ. ಕನ್ನಡ ಸಾಹಿತ್ಯ ರಂಗವು ಪ್ರಕಟಿಸಿದ ‘ಮಥಿಸಿದಷ್ಟೂ ಮಾತು’ ಗ್ರಂಥದ ಪ್ರಧಾನ ಸಂಪಾದಕಿ. ಕನ್ನಡ ಸಾಹಿತ್ಯ ರಂಗವು ಹೊರತಂದಿರುವ ಗ್ರಂಥಗಳಾದ ‘ಬೇರು ಸೂರು’ (ಸಹ ಸಂಪಾದನೆ), ‘ಬದಲಾವಣೆಯ ಬೆನ್ನಟ್ಟಿ’(ಸಂಪಾದಕ ಮಂಡಳಿ). ಕನ್ನಡ ಸಾಹಿತ್ಯ ರಂಗವು ಹೊರತಂದಿರುವ ಎಲ್ಲಾ ಗ್ರಂಥಗಳಲ್ಲಿಯೂ ತ್ರಿವೇಣಿಯವರ ಲೇಖನಗಳು ಪ್ರಕಟಗೊಂಡಿವೆ. ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳು, ಕಥ, ಕವನಗಳು ಪ್ರಕಟವಾಗಿವೆ.
ಇಲಿನಾಯ್ ರಾಜ್ಯದ ‘ವಿದ್ಯಾರಣ್ಯ’ ಕನ್ನಡಕೂಟದ ಸಕ್ರಿಯ ಸದಸ್ಯರು. ವಿದ್ಯಾರಣ್ಯದ ‘ಸಂಗಮ’ ಸಂಚಿಕೆಯ ಸಂಪಾದನೆ, “ಸಾಹಿತ್ಯೋತ್ಸವ ಸಮಿತಿ’, ‘ದಾಸ ಸಮಿತಿ’ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಂತರ್ಜಾಲ ತಾಣ : ‘ತುಳಸಿವನ.ಕಾಂ’
ಕ್ರಮ ಸ೦ಖ್ಯೆ | ಶೀರ್ಷಿಕೆ | ಪ್ರಾಕಾರ | ಪ್ರಕಟಣೆಯ ಮಾಧ್ಯಮ | ವಿವರ ಮತ್ತು ಕೊ೦ಡಿ |
---|---|---|---|---|
1 | ತುಳಸಿವನ | ಅಂಕಣ ಬರಹಗಳು | ಮುದ್ರಿತ | —- |
2 | ತಿಳಿ ನೀಲಿ ಪೆನ್ನು | ಸಣ್ನ ಕಥಾ ಸಂಕಲನ | ಮುದ್ರಿತ | —- |
3 | ಮಥಿಸಿದಷ್ಟೂ ಮಾತು | ಸಂಪಾದನೆ (ಮುಖ್ಯ ಸಂಪಾದಕಿ) | ಮುದ್ರಿತ | —- |
4 | ಬೇರು ಸೂರು | ಸಂಪಾದನೆ (ಸಹ ಸಂಪಾದಕಿ) | ಮುದ್ರಿತ | —- |
5 | ದೀಪ ತೋರಿದೆಡೆಗೆ | ಸಂಪಾದನೆ (ಸಹ ಸಂಪಾದಕಿ) | ಮುದ್ರಿತ | —- |
6 | ಬದಲಾವನೆಯ ಬೆನ್ನಟ್ಟಿ | ಸಂಪಾದನೆ (ಸಂಪಾದಕೀಯ ಮಂಡಳಿ) | ಮುದ್ರಿತ | —- |
———