ಕಾವ್ಯನಾಮ
ಗಂಧಾಕ್ಷತೆ
ಪರಿಚಯ
ಮೂಲತಃ ಬೆಂಗಳೂರಿನವರಾದ ರವಿ ಗೋಪಾಲರಾವ್ ಅಮೇರಿಕಾಗೆ ಬಂದದದ್ದು ವಿದ್ಯಾರ್ಥಿಯಾಗಿ. ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯದಿಂದ ಡಾಕ್ಟೊರೇಟ್ ಪದವಿ ಪಡೆದು, ಸಿಲಿಕಾನ್ ಕಣಿವೆಯಲ್ಲಿ ಶೈಕ್ಷಣಿಕ, ಕನ್ಸಲ್ಟಿಂಗ್ ಮತ್ತು ಐ. ಟಿ. ಉದ್ಯಮದಲ್ಲಿ ತೊಡಗಿದ್ದಾರೆ. ಕನ್ನಡಾಭಿಮಾನಿ ರವಿಯವರು ಕೆಲವು ಸಣ್ಣ ಕತೆ ಹಾಗು ಕವನಗಳನ್ನು ಪ್ರಕಟಿಸಿದ್ದಲ್ಲದೆ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ 2004 ಮತ್ತು 2016ರ ಸ್ವರ್ಣಸೇತುವಿನ ಪ್ರಧಾನ ಸಂಪಾದಕರಾಗಿ, ಅಕ್ಕ ಸಾಹಿತ್ಯ ವೇದಿಕೆ ಬಿಡುಗಡೆ ಮಾಡಿದ “ಕಥಾಸಂಭ್ರಮ”ದ ಸಹಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಲ್ಲಿ ಅವರ ಹಲವಾರು ಪ್ರಬಂಧಗಳು ಮುದ್ರಿತವಾಗಿವೆ. ಕನ್ನಡ ಗಾದೆಗಳು, ಪ್ರೇರಣೆ, ಕನ್ನಡ ಪ್ರಶ್ನಾವಳಿ, ಕಲಸುಮೇಲೋಗರ ಇವರ ಪ್ರಕಟಿತ ಜನಪ್ರಿಯ ಇ-ಪುಸ್ತಕಗಳು. ಇವರು ಬರೆದಿರುವ Kannada Proverbs ಎನ್ನುವ ಇಂಗ್ಲಿಷ್ ಮತ್ತು ಕನ್ನಡ ಪುಸ್ತಕಗಳು ಅಮೆಜಾನ್ ನಲ್ಲಿ ಪ್ರಿಂಟ್ ಮಾಧ್ಯಮದಲ್ಲಿ ದೊರೆಯುತ್ತವೆ
ಪ್ರಕಟಗೊ೦ಡ ಕೃತಿಗಳು
ಕ್ರಮ ಸ೦ಖ್ಯೆ | ಶೀರ್ಷಿಕೆ | ಪ್ರಾಕಾರ | ಪ್ರಕಟಣೆಯ ಮಾಧ್ಯಮ | ವಿವರ ಮತ್ತು ಕೊ೦ಡಿ |
---|---|---|---|---|
1 | ಕನ್ನಡ ಗಾದೆಗಳು | ಇತರೆ ಪ್ರಾಕಾರ | ಮುದ್ರಿತ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
2 | Kannada Proverbs | ಇತರೆ ಪ್ರಾಕಾರ | ಮುದ್ರಿತ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
3 | ಕಲಸುಮೇಲೋಗರ | ಇತರೆ ಪ್ರಾಕಾರ | ಎಲೆಕ್ಟ್ರಾನಿಕ್ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
4 | ಪ್ರೇರಣೆ ತೀರದ ಪಾತಿ | ಇತರೆ ಪ್ರಾಕಾರ | ಎಲೆಕ್ಟ್ರಾನಿಕ್ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
5 | ಕನ್ನಡ ಪ್ರಶ್ನಾವಳಿ | ಇತರೆ ಪ್ರಾಕಾರ | ಎಲೆಕ್ಟ್ರಾನಿಕ್ ಮಾಧ್ಯಮ | ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ |
ಪ್ರಕಟಗೊಳ್ಳದ ಕೃತಿಗಳು
ಕ್ರಮ ಸ೦ಖ್ಯೆ | ಶೀರ್ಷಿಕೆ | ಪ್ರಾಕಾರ | ಪ್ರಕಟಿಸುವ ಉದ್ದೇಶ ಇದೆಯೇ? | ಟಿಪ್ಪಣಿ |
---|---|---|---|---|
1 | ಅಸ್ತಿತ್ವ-ಸಣ್ಣ ಕಥೆಗಳ ಸಂಕಲನ | ಕಥಾಗುಚ್ಛ | ಹೌದು | – |
2 | ಪ್ರಬಂಧಗಳು | ಪ್ರಬ೦ಧ /ವಿಮರ್ಶೆ | ಇಲ್ಲ | – |